Friday, 23 December 2016
Monday, 12 December 2016
ಹರಿತ ಕಾರ್ಯಕ್ರಮದ ವರದಿ
ಹರಿತ ಕಾರ್ಯಕ್ರಮದ ವರದಿ
ದಿನಾಂಕ 8/12/2016 ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ಹರಿತ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು.ಸಮಯ ಸರಿಯಾಗಿ 10 ಗಂಟೆಗೆ ಎಂದಿನಂತೆ ಶಾಲಾ ಅಸಂಬ್ಲಿಯು ಆರಂಭಗೊಂಡಿತು.ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಚಂದ್ರಾವತಿ ಯವರು ಕಾರ್ಯಕ್ರಮದ ಬಗ್ಗೆ ಕಿರು ಮಾಹಿತಿ ನೀಡಿದರು.ಈ ಸಮಯದಲ್ಲಿ ಎಲ್ಲ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಹರಿತ ಕಾರ್ಯಕ್ರಮದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
ಬಳಿಕ ಹರಿತ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಲಾಯಿತು.ಈ ಸಭೆಯಲ್ಲಿ ವಾರ್ಡ್ ಮೆಂಬರರಾದ ಶ್ರೀಮತಿ ಜೆಸಿಂತ ಡಿಸೋಜರವರು,ವರ್ಕಾಡಿ ಪಂಚಾಯತ್ ನ ಯೂತ್ ಕೊರ್ಡಿನೇಟರ್ ರಾದ ಶ್ರೀಮಾನ್ ಜಯ ಪ್ರಕಾಶ್ , ಅಂಗನವಾಡಿ ಕಾರ್ಯಕ್ರತೆಯರು,ಕುಟುಂಬ ಶ್ರೀ ಕಾರ್ಯಕರ್ತೆಯರು, ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಅಂಗನವಾಡಿ ಸದಸ್ಯರಾದ ಕುಮಾರಿ ಸರಿತರವರು ಸ್ವಾಗತ ವನ್ನು ನೇರವೇರಿಸಿದರು.
ಕುಮಾರಿ ಸರಿತರವರಿಂದ ಸ್ವಾಗತ
ಬಳಿಕ ಚಂದ್ರಾವತಿ ಟೀಚರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಹರಿತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ವಾರ್ಡ್ ಮೆಂಬರ್ ರಾದ ಶ್ರೀಮತಿ ಜೆಸಿಂತರವರು ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಹೆಲ್ತ್ ನವರಾದ ಸಿಸ್ಟರ್ ಶೋಭಾ ರವರು ಉಪಯುಕ್ತ ಮಾಹಿತಿ ನೀಡಿ ಹಾಡು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಶ್ರೀಮತಿ ಶಶಿಕಲ ಟೀಚರ್ ರವರು ದನ್ಯವಾದ ಸಮರ್ಪಿಸಿದರು.
ಬಳಿಕ ಶಾಲಾ ಮಕ್ಕಳಿಂದ ಜನ ಜಾಗೃತಿ ಚಟುವಟಿಕೆಯ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೇರಿ ಪರಿಸರ ಶುಚೀಕರಣ ಮಾಡಿದರು.
ಬಳಿಕ ಶಾಲಾ ಮಕ್ಕಳಿಂದ ಜನ ಜಾಗೃತಿ ಚಟುವಟಿಕೆಯ ಸಲುವಾಗಿ ಮೆರವಣಿಗೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೇರಿ ಪರಿಸರ ಶುಚೀಕರಣ ಮಾಡಿದರು.
ಮಕ್ಕಳು ತಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲಾಯಿತು.
ಮಕ್ಕಳಿಗಾಗಿ ಚಿತ್ರ ರಚನೆ ,ಪ್ರಬಂಧ ರಚನೆ ,ರಸಪ್ರಶ್ನೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Sunday, 30 October 2016
Tuesday, 25 October 2016
Thursday, 18 August 2016
Report of independence day 2016
ಸ್ವಾತಂತ್ರ್ಯ ದಿನಾಚರಣೆಯ ವರದಿ
70 ನೇ ಸ್ವಾತಂತ್ರ್ಯ ದಿನಾಚರಣೆಯನ್ನು
ನಮ್ಮ ಶಾಲೆಯಲ್ಲಿ ಅದ್ಧೂರಿಯಾಗಿ
ಆಚರಿಸಲಾಯಿತು.ಸಮಯ ಸರಿಯಾಗಿ 9.30ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಜೈಕಾರಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಬಳಿಕ ಶಾಲಾ ಅಸೆಂಬ್ಲಿ
ನಡೆಸಲಾಯಿತು.ವಾರ್ಡ್ ಸದಸ್ಯರಾದ ಜೆಸಿಂತಾ
ರವರಿಂದ ಧ್ವಜಾರೋಹಣ ನೆರವೇರಿತು. ಈ ಸಮಯದಲ್ಲಿ ವಿದ್ಯಾರ್ಥಿಗಳು,ಅಧ್ಯಾಪಕರು ಅಲ್ಲದೆ ಶಾಲಾ ಹಳೆ ವಿದ್ಯಾರ್ಥಿಗಳು,ಮೆನೇಜರ್ ,ರಕ್ಷಕರು ,ಹಾಗೂ ಊರಿನ
ಜನರು ಉಪಸ್ಥಿತರಿದ್ದರು.
ಬಳಿಕ ಸಭಾ ಕಾರ್ಯಕ್ರಮ
ನೆರವೇರಿತು.ಅತಿಥಿಗಳಾಗಿ ಮಾಜಿ ಬ್ಲೋಕ್ ಪಂಚಾಯತ್ ಸದಸ್ಯರಾದ ಮೂಸ kunhi ,ಮಾಜಿ ಪಂಚಾಯತ್
ಸದಸ್ಯರಾದ ನಿಕೋಲಸ್ ಮೊಂತೆರೋ, ಊರಿನ ಹಿರಿಯರಾದ ಟಿ.ಯಮ್.ಮೊಹಮ್ಮದ್ , ಪಿ,ಟಿ.ಎ ಅಧ್ಯಕ್ಷರಾದ
ಅಬ್ದುಲ್ ರಹಿಮಾನ್ ಉಸ್ತಾದ್, ಶಾಲಾ ಮೆನೇಜರ್ ರಾದ ದೇವಪ್ಪ ಮಾಸ್ಟರ್ ಉಪಸ್ಥಿತರಿದ್ದರು. ಶ್ರೀಮತಿ
ಶಶಿಕಲ ಟೀಚರ್ ರವರು ಕಾರ್ಯಕ್ರಮ ನಿರೂಪಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ
ಟೀಚರ್ ಸ್ವಾಗತ ಕೋರಿದರು. ಎಲ್ಲಾ ಅಥಿತಿಗಳು ಕಾರ್ಯಕ್ರಮಕ್ಕೆ ಶುಭ ಕೋರಿದರು. ಸ್ವಾತಂತ್ರ್ಯ
ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಮೆಯ ಅಂಗವಾಗಿ
ನಡೆಸುವ ಯೋಜನೆಯ ಮಾಹಿತಿ ನೀಡಿ ದಾನಿಗಳ ಹೆಸರುಗಳನ್ನು ಓದಿ ಹೇಳಲಾಯಿತು. ಶೈಲೇಶ್ ಸರ್ ರವರು
ಧನ್ಯವಾದ ಸಮರ್ಪಿಸಿದರು.
ಬಳಿಕ ಮಕ್ಕಳಿಂದ ಸಾಂಸ್ಕೃತಿಕ
ಕಾರ್ಯಕ್ರಮ ನಡೆಯಿತು.ಶಾಲಾ ವಿದ್ಯಾರ್ಥಿನಿಯಾದ
ಕುಮಾರಿ ಮಂಜುಶ್ರೀ ಕಾರ್ಯಕ್ರಮ
ನಿರೂಪಿಸಿದರು. ಮಕ್ಕಳಿಂದ ದೇಶ ಭಕ್ತಿಗೀತೆ ,ನಾಟಕ,ಅಭಿನಯ ಗೀತೆ ,ಮಾಸ್ ಡ್ರಿಲ್,ನೃತ್ಯ ಮೊದಲಾದ
ಕಾರ್ಯಕ್ರಮಗಳು ಜರುಗಿತು.ಈ ನಡುವೆ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.ಕೊನೆಗೆ ರಾಷ್ಟಗೀತೆ
ಹಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
Wednesday, 17 August 2016
Photos of independence day
Subscribe to:
Posts (Atom)