ಶಾಲಾ ಪ್ರವೇಶೋತ್ಸವ
ಶಾಲಾ ಪ್ರವೇಶೋತ್ಸವ : ವರ್ಕಾಡಿ ಜೂನ್ 1: ಶ್ರೀ ಸುಭ್ರಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆಯಲ್ಲಿ 2017-18 ನೇ ಸಾಲಿನ ಶಾಲಾ ಪ್ರವೇಶೋತ್ಸವವು ಜರಗಿತು. ಪ್ರವೇಶೋತ್ಸವದ ಉಧ್ಫಾಟನೆಯನ್ನು ವಾರ್ಡ ಸದಸ್ಯೆ ಶ್ರೀಮತಿ ಜಸಿಂತ ಡಿಸೋಜರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಭಂದಕರು,ರಕ್ಷಕ-ಶಿಕ್ಷಕ ಸಂಘದ ಅದ್ಯಕ್ಷರು ಹಾಗು ಇತರರು ಉಪಸ್ತಿತರಿದ್ದರು.
ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಾಠ ಪುಸ್ತಕ ವಿತರಿಸಲಾಯಿತು.
ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ೨೦೧೭-೧೮ ರ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ವಿಜೃಂಭಣೆಯಾಗಿ ನಡೆಯಿತು. ವಿದ್ಯಾರ್ಥಿಗಳು, ಪೋಷಕರು ಹಾಗು ಶಿಕ್ಷಕ ರು ಭಾಳ ಉತ್ಸಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಲಾ ಅಸೆಂಬ್ಲಿಯ ನಂತರ ಶಾಲಾ ಪರಿಸರದಲ್ಲಿ ಘೋಷಣಾ ವಾಕ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು. ವಾರ್ಡ್ ಸದಸ್ಯೆ ಜೆಸಿಂತಾ ಡಿ ಸೋಜ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಪ್ರಬಂಧಕರಾದ ಶ್ರೀಯುತ ದೇವಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಶಾಲಾಭಿವರ್ಧಿ ಸಮಿತಿ ಅಧ್ಯಕ್ಷ ಶ್ರೀ ಜಯಂತ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಮುಸ್ತಾಫಾ , ಪಿ ಟಿ ಎ ಅಧ್ಯಕ್ಷ ಅಬ್ದುಲ್ ರಹಿಮಾನ್ , ಮಾಜಿ ಪಿ ಟಿ ಎ ಅಧ್ಯಕ್ಷ ಸೋಮನಾಥ ಕಾರಂತ ಸಭೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕರು ಉಚಿತವಾಗಿ ನೀಡಿದ ಕೊಡೆ,ಬ್ಯಾಗ್ ವಿತರಿಸಲಾಯಿತು. ಶ್ರೀಮತಿ ಚಿತ್ರ ಟೀಚರ್ ನಿರೂಪಣೆ ಮಡಿದ ಕಾರ್ಯಕ್ರಮವನ್ನು ಶ್ರೀಮತಿ ಶಶಿಕಲಾ ಟೀಚರ್ ವಂದಿಸಿದರು.
No comments:
Post a Comment