ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಸಿರಿದಾನ್ಯವರ್ಷದ ಅಂಗವಾಗಿ ಮಕ್ಕಳಿಗೆ ಖಾದ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಐವತ್ತಕ್ಕೂ ಹೆಚ್ಚು ಬಗೆಯ ಖಾದ್ಯಗಳು ಮೇಳದಲ್ಲಿದ್ದವು. ರಾಗಿ ಪಾಯಸ, ರಾಗಿ ಮುದ್ದೆ, ಜೋಳದ ರೊಟ್ಟಿ ಮುಂತಾದವುಗಳು ಮೇಳದಲ್ಲಿ ಮಕ್ಕಳ ಮನಸೆಳೆದವು. ಶಾಲಾ ಮುಖ್ಯೋಪಾದ್ಯಯರಾದ ಶ್ರೀ ಶೈಲೇಶ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲಾ ಶಿಕ್ಷಕಿಯಾರಾದ ಚಿತ್ರಾ, ಲಾವಣ್ಯ, ಫೌಸಿಯ, ಜಯಲಕ್ಷ್ಮಿ ಮುಂತಾದವರು ಮಕ್ಕಳಿಗೆ ಸಿರಿದಾನ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
No comments:
Post a Comment