Tuesday, 14 July 2026

SCHOOL PARLIMENT ELECTION 2026

 ಶಾಲಾ ಚುನಾವಣೆ 2026

ಎಸ್.ಎಸ್.ಎ.ಎಲ್. ಪಿ ಶಾಲೆ ಮುಡೂರು ತೋಕೆಯಲ್ಲಿ ವಯಸ್ಕರ ರೀತಿಯಲ್ಲಿ ಮತದಾನವು ನಡೆಯಿತು.ಜುಲೈ 8 ರಂದು ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವ 4 ಮಕ್ಕಳು ಶಾಲಾ ಮುಖ್ಯೋಪಾಧ್ಯಾಯರಿಗೆ ನಾಮ ಪತ್ರವನ್ನು ಸಲ್ಲಿಸಿದರು. ನಂತರದ ದಿನಗಳಲ್ಲಿ ಮತಗಳನ್ನು ಯಾಚಿಸಲಾಯಿತು.ಜುಲೈ 10 ರಂದು ಚುನಾವಣೆಯು ನಡೆಯಿತು. ಅಧ್ಯಾಪಕರ ನೇತೃತ್ವದಲ್ಲಿ ಶಾಲಾ ಮಕ್ಕಳೇ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಎಲ್ಲಾ ಮಕ್ಕಳು ಉತ್ಸಾಹದಿಂದಲೇ ಶಾಲಾ ಚುನಾವಣೆಯಲ್ಲಿ ಭಾಗವಹಿಸಿದರು. ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಹಾಕಿದರು. ಬಳಿಕ ಚುನಾವಣಾ ಎಣಿಕಾ ಪ್ರಕ್ರಿಯೆ ಆರಂಭವಾಯಿತು. ಅತಿ ಹೆಚ್ಚು ಮತಗಳನ್ನು ಪಡೆದ ಮೊಹಮ್ಮದ್ ಮುಹಸಿನ್ ಶಾಲಾ ನಾಯಕನಾಗಿಯೂ, ನಾಫಿ ಉಪನಾಯಕನಾಗಿಯೂ ಆಯ್ಕೆಯಾದರು. ಶಾಲಾ ವಿವಿಧ ಇಲಾಖೆಯ ಮಂತ್ರಿಮಂಡಲವನ್ನು ರಚಿಸಿ ಮಂತ್ರಿಗಳನ್ನು ಆಯ್ಕೆ ಮಾಡಿ ಜವಾಬ್ದಾರಿಗಳನ್ನು ಹಂಚಲಾಯಿತು. ಬಳಿಕ ಪ್ರತಿಜ್ಞಾ ಸ್ವೀಕಾರ ನಡೆಯಿತು.





 

PTA GENERALBODY MEETING 2026

 ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ 2026

ದಿನಾಂಕ 10/07/2026 ನೇ ಶುಕ್ರವಾರದಂದು ಸರಿಯಾಗಿ 2 ಗಂಟೆಗೆ ಈ ವರ್ಷದ ಮೊದಲ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರುಗಿತು. ಶಾಲಾ ಪ್ರಬಂಧಕರು, ಪಿಟಿಎ ಅಧ್ಯಕ್ಷರಾದ ಶ್ರೀ ಅಬ್ದುಲ್ ಕಾಸಿಂ ,ಉಪಾಧ್ಯಕ್ಷರಾದ ಅಬೂಬಕರ್ ಸಿದ್ಧಿಕ್, ಮಾತೃ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಪ್ರೀತಿಕ ಹಾಗೂ ರಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಬಂಧಕರಾದ ಶ್ರೀದೇವಪ್ಪ ಶೆಟ್ಟಿ ಅವರು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. .ಪಿಟಿಎ ಅಧ್ಯಕ್ಷರಾದ ಶ್ರೀ ಅಬ್ದುಲ್ ಕಾಸಿಮ್ ರವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ಶೈಲೇಶ್ ರವರು ಬಂದಿರುವ  ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಕಳೆದ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ವರದಿಯನ್ನು ಅಧ್ಯಾಪಕಿ ಶ್ರೀಮತಿ ಚಿತ್ರ ರವರು ಮಂಡಿಸಿದರು. ಬಳಿಕ ನೂತನ ಪಿಟಿಎ ಅಧ್ಯಕ್ಷರ ಹಾಗೂ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಶ್ರೀ ಅಬ್ದುಲ್ ಕಾಸಿಂ ರವರು ಪಿಟಿಎ ಅಧ್ಯಕ್ಷರಾಗಿ ,ಹಾಗೂ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಶ್ರೀಮತಿ ಸವಿತ ರವರು ಮಾತೃ ಸಂಘದ ಅಧ್ಯಕ್ಷೆ ಯಾಗಿಯೂ,ಶ್ರೀಮತಿ ಶೋಭಾರವರು ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾದರು. ಬಳಿಕ ಕಾರ್ಯಕಾರಿ ಸಮಿತಿಯನ್ನು ರೂಪಿಸಲಾಯಿತು.ಅಧ್ಯಾಪಕಿ ಶ್ರೀಮತಿ ಲಾವಣ್ಯರವರು ಧನ್ಯವಾದ ಸಮರ್ಪಿಸಿದರು.