Monday, 30 December 2019
Thursday, 21 November 2019
ವಿದ್ಯಾಲಯ ಪ್ರತಿಭೆಗಳ ಕಡೆಗೆ
*ಮುಡೂರ್ ತೋಕೆ ಶಾಲೆ ಪ್ರತಿಭೆಗಳ ಕಡೆಗೆ*
ಮಂಜೇಶ್ವರ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆಯು ಕೇರಳ ಸರಕಾರ ದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ನಡೆಸುವ ವಿದ್ಯಾಲಯ ಪ್ರತಿಭೆಗಳ ಕಡೆಗೆ ಎಂಬ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಸಮೀಪದ ಪ್ರತಿಭೆ ಪ್ರೊಫೆಸರ್ ಶ್ರೀ ದಾನಪ್ಪರವರ ಗೃಹ ಸಂದರ್ಶನ ನಡೆಸಿದರು. ಸಂದರ್ಶನದಲ್ಲಿ ಶಾಲಾ ಮುಕ್ಯೋಪಾಧ್ಯಾಯಿನಿ ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಭೌತ ಶಾಸ್ತ್ರ ದ ಉಪನ್ಯಾಸಕರಾದ ದಾನಪ್ಪರವರ ಪುಟ್ಟ ಪುಟ್ಟ ಸಂಶೋಧನೆ ಗಳು ಅಕ್ಕಳ ಮನಸೂರೆಗೊಂಡವು. ವಿಜ್ಞಾನದ ವಿಸ್ಮಯ ಗಳಲ್ಲಿ ಮಕ್ಕಳೇ ಪುಟ್ಟ ವಿಜ್ಞಾನಿಗಳಾಗಿ ಬದಲಾಗುವಂತೆ ದಾನಪ್ಪರವರ ಭೌತಶಾಸ್ತ ಪ್ರಯೋಗಾಲಯ ಸಹಾಯ ಮಾಡಿತು. ದಾನಪ್ಪರವರು ಚಿಕ್ಕಂದಿನಿಂದ ಇಲ್ಲಿವರೆಗೆ ಸಾಗಿಬಂದ ಬದುಕಿನ ದಾರಿಯನ್ನು ಬಹಳ ಸ್ವರಸ್ಯವಾಗಿ ಮಕ್ಕಳಿಗೆ ವಿವರಿಸಿದರು. ಶಾಲೆಯ ಜೈವಿಕ ಉದ್ಯಾನದಿಂದ ಕೀಳಿದ ಹೂಗಳಿಂದ ತಯಾರಿಸಿದ ಹೂ ಗುಚ್ಛ ವನ್ನು ಪುಟಾಣಿ ಮಕ್ಕಳು ದಾನಪ್ಪನವರಿಗೆ ನೀಡಿ ಅವರನ್ನು ಗೌರವಿಸಿದರು. ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಇದ್ದ ಸಂಶಯಗಳು ದಾನಪ್ಪರವರ ಮುಂದೆ ಪ್ರಶ್ನೆಗಳಾಗಿ ಕೇಳಿದಾಗ ಪುಟಾಣಿ ಮಕ್ಕಳಿಗೆ ಮನದಟ್ಟಾಗುವ ರೀತಿಯಲ್ಲಿ ಉತ್ತರಿಸಿದ ರು. ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವನ್ನು ತಮ್ಮೊಂದಿಗೆ ಹಂಚಿಕೊಂಡ ದಾನಪ್ಪರವರಿಗೆ ಹೃತ್ಪೂರ್ವಕ ಧನ್ಯವಾದ ಸಮರ್ಪಿಸಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಶಾಲೆಗೆ ಮರಳಿದರು.
ಮಂಜೇಶ್ವರ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆಯು ಕೇರಳ ಸರಕಾರ ದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ನಡೆಸುವ ವಿದ್ಯಾಲಯ ಪ್ರತಿಭೆಗಳ ಕಡೆಗೆ ಎಂಬ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಸಮೀಪದ ಪ್ರತಿಭೆ ಪ್ರೊಫೆಸರ್ ಶ್ರೀ ದಾನಪ್ಪರವರ ಗೃಹ ಸಂದರ್ಶನ ನಡೆಸಿದರು. ಸಂದರ್ಶನದಲ್ಲಿ ಶಾಲಾ ಮುಕ್ಯೋಪಾಧ್ಯಾಯಿನಿ ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಭೌತ ಶಾಸ್ತ್ರ ದ ಉಪನ್ಯಾಸಕರಾದ ದಾನಪ್ಪರವರ ಪುಟ್ಟ ಪುಟ್ಟ ಸಂಶೋಧನೆ ಗಳು ಅಕ್ಕಳ ಮನಸೂರೆಗೊಂಡವು. ವಿಜ್ಞಾನದ ವಿಸ್ಮಯ ಗಳಲ್ಲಿ ಮಕ್ಕಳೇ ಪುಟ್ಟ ವಿಜ್ಞಾನಿಗಳಾಗಿ ಬದಲಾಗುವಂತೆ ದಾನಪ್ಪರವರ ಭೌತಶಾಸ್ತ ಪ್ರಯೋಗಾಲಯ ಸಹಾಯ ಮಾಡಿತು. ದಾನಪ್ಪರವರು ಚಿಕ್ಕಂದಿನಿಂದ ಇಲ್ಲಿವರೆಗೆ ಸಾಗಿಬಂದ ಬದುಕಿನ ದಾರಿಯನ್ನು ಬಹಳ ಸ್ವರಸ್ಯವಾಗಿ ಮಕ್ಕಳಿಗೆ ವಿವರಿಸಿದರು. ಶಾಲೆಯ ಜೈವಿಕ ಉದ್ಯಾನದಿಂದ ಕೀಳಿದ ಹೂಗಳಿಂದ ತಯಾರಿಸಿದ ಹೂ ಗುಚ್ಛ ವನ್ನು ಪುಟಾಣಿ ಮಕ್ಕಳು ದಾನಪ್ಪನವರಿಗೆ ನೀಡಿ ಅವರನ್ನು ಗೌರವಿಸಿದರು. ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಇದ್ದ ಸಂಶಯಗಳು ದಾನಪ್ಪರವರ ಮುಂದೆ ಪ್ರಶ್ನೆಗಳಾಗಿ ಕೇಳಿದಾಗ ಪುಟಾಣಿ ಮಕ್ಕಳಿಗೆ ಮನದಟ್ಟಾಗುವ ರೀತಿಯಲ್ಲಿ ಉತ್ತರಿಸಿದ ರು. ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವನ್ನು ತಮ್ಮೊಂದಿಗೆ ಹಂಚಿಕೊಂಡ ದಾನಪ್ಪರವರಿಗೆ ಹೃತ್ಪೂರ್ವಕ ಧನ್ಯವಾದ ಸಮರ್ಪಿಸಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಶಾಲೆಗೆ ಮರಳಿದರು.
Wednesday, 16 October 2019
sub disrict school shastrolsavam 2019
ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳದಲ್ಲಿ ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯ ವಿದ್ಯಾರ್ಥಿಗಳು ಉತ್ತಮ ಸಾಮರ್ಥ್ಯ ವನ್ನು ತೋರಿಸಿರುವರು.
🔥ಫ್ಯಾಬ್ರಿಕ್ ಪೈಂಟಿಂಗ್ ನಲ್ಲಿ ಅಬ್ದುಲ್ ರಹಿಮಾನ್ ಮಿಕ್ಡದ್ A grade ನೊಂದಿಗೆ 5 ಅಂಕ ಗಳಿಸಿರುವನು.
🔥ಮಾಡೆಲ್ ವಿಥ್ ಕ್ಲೆಯ್ ಯಲ್ಲಿ ಅಸ್ಲಾಂ B grade ನೊಂದಿಗೆ 3 ಅಂಕ ಗಳಿಸಿರುವನು.
🔥ಪೇಪರ್ ಕ್ರೇಫ್ಟ್ ನಲ್ಲಿ ಧನ್ಯ ಬ್ ಗ್ರಾದೆ ನೊಂದಿಗೆ 3 ಅಂಕ ಗಳಿಸಿರುವಳು.
🔥waste material product ನಲ್ಲಿ ಮುಬಸಿರ್ c grade ನೊಂದಿಗೆ 1 ಅಂಕ ಗಳಿಸಿರುವನು.
🔥ಸಮಾಜವಿಜ್ಞಾನ ಮಾಡೆಲ್ ನಲ್ಲಿ ಶ್ರೀನಿಧಿ ಹಾಗೂ ಹೃತ್ವಿಕ್ c grade ನೊಂದಿಗೆ 1 ಅಂಕ ಗಳಿಸಿರುವರು.
ಸ್ಪರ್ಧೆ ಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗು ಅಭಿನಂದನೆಗಳು ಮುಂದಿನ ವರ್ಷಗಳಲ್ಲಿ ನಡೆವ ಸ್ಪರ್ಧೆಗಳಲ್ಲಿ ಇನ್ನು ಉನ್ನತ grade ಗಳನ್ನು ಖಂಡಿತವಾಗಿಯೂ ನಮ್ಮ ಮಕ್ಕಳು ನಮ್ಮ ಶಾಲೆಗೆ ತಂದು ಕೊಡಬಲ್ಲರು. ಯಾವ ಶಾಲೆಗೂ ಕಡಿಮೆ ಇಲ್ಲ ನಮ್ಮ ಮುಡೂರ್ ತೋಕೆ ಶಾಲೆ. 💪🏻
🔥ಫ್ಯಾಬ್ರಿಕ್ ಪೈಂಟಿಂಗ್ ನಲ್ಲಿ ಅಬ್ದುಲ್ ರಹಿಮಾನ್ ಮಿಕ್ಡದ್ A grade ನೊಂದಿಗೆ 5 ಅಂಕ ಗಳಿಸಿರುವನು.
🔥ಮಾಡೆಲ್ ವಿಥ್ ಕ್ಲೆಯ್ ಯಲ್ಲಿ ಅಸ್ಲಾಂ B grade ನೊಂದಿಗೆ 3 ಅಂಕ ಗಳಿಸಿರುವನು.
🔥ಪೇಪರ್ ಕ್ರೇಫ್ಟ್ ನಲ್ಲಿ ಧನ್ಯ ಬ್ ಗ್ರಾದೆ ನೊಂದಿಗೆ 3 ಅಂಕ ಗಳಿಸಿರುವಳು.
🔥waste material product ನಲ್ಲಿ ಮುಬಸಿರ್ c grade ನೊಂದಿಗೆ 1 ಅಂಕ ಗಳಿಸಿರುವನು.
🔥ಸಮಾಜವಿಜ್ಞಾನ ಮಾಡೆಲ್ ನಲ್ಲಿ ಶ್ರೀನಿಧಿ ಹಾಗೂ ಹೃತ್ವಿಕ್ c grade ನೊಂದಿಗೆ 1 ಅಂಕ ಗಳಿಸಿರುವರು.
ಸ್ಪರ್ಧೆ ಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗು ಅಭಿನಂದನೆಗಳು ಮುಂದಿನ ವರ್ಷಗಳಲ್ಲಿ ನಡೆವ ಸ್ಪರ್ಧೆಗಳಲ್ಲಿ ಇನ್ನು ಉನ್ನತ grade ಗಳನ್ನು ಖಂಡಿತವಾಗಿಯೂ ನಮ್ಮ ಮಕ್ಕಳು ನಮ್ಮ ಶಾಲೆಗೆ ತಂದು ಕೊಡಬಲ್ಲರು. ಯಾವ ಶಾಲೆಗೂ ಕಡಿಮೆ ಇಲ್ಲ ನಮ್ಮ ಮುಡೂರ್ ತೋಕೆ ಶಾಲೆ. 💪🏻
Friday, 6 September 2019
ಮುಡೂರ್ ತೋಕೆ ಶಾಲೆಯಲ್ಲಿ ಲ್ಯಾಪ್ಟಾಪ್ ಪ್ರಾಜೆಕ್ಟರ್ ಉದ್ಘಾಟನೆ ಹಾಗೂ ಓಣಂ ಆಚರಣೆ
ವರ್ಕಾಡಿ: ಶ್ರೀ ಸುಬ್ರಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆಯಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ದ ಭಾಗವಾಗಿ ಲಭಿಸಿದ ಲ್ಯಾಪ್ಟಾಪ್ ಹಾಗೂ ಪ್ರಾಜೆಕ್ಟರ್ ಗಳ ಉದ್ಘಾಟನೆ ಮತ್ತು ಓಣಂ ಹಬ್ಬದ ಆಚರಣೆಯು ಬಹಳ ವಿಜ್ರಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಉಪ ಜಿಲ್ಲಾ ಬಿಪಿಓ ಕುಮಾರ್ ನೆರವೇರಿಸಿದರು. ಲ್ಯಾಪ್ಟಾಪ್ ಪ್ರೊಜೆಕ್ಟ್ರ್ ಗಳ ಉದ್ಘಾಟನೆಯನ್ನು ನಿವೃತ ಮುಕ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರವತಿ ನೆರವೇರಿಸಿದರು. ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ಅಬೂಬಕ್ಕರ್ ಸಿಧ್ಧಿಕ್ ಹಾಗೂ ಮಾತೃ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ಮಮತಾ ರವರು ಶುಭ ಹಾರೈಸಿದರು. ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ ಹಾಗೂ ಇತರ ಆಟೋಟ ಸ್ಪರ್ಧೆ ಮಕ್ಕಳಿಗೂ ಮಕ್ಕಳ ಹೆತ್ತವರಿಗೂ ನಡೆಸಲಾಯಿತು. ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶಶಿಕಲಾ ಸ್ವಾಗತಿಸಿದ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕಿ ಶ್ರೀಮತಿ ಲಾವಣ್ಯ ನಿರೂಪಿಸಿದರು. ಶಾಲಾ ಶಿಕ್ಷಕ ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.
Wednesday, 4 September 2019
Wednesday, 10 July 2019
SCHOOL PARLIMENT 2019
ಮುಡೂರ್ ತೋಕೆ ಶಾಲಾ ಪಾರ್ಲಿಮೆಂಟ್ ರಚನೆ
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 2019-20ನೇ ಸಾಲಿನ ಶಾಲಾ ಚುನಾವಣೆಯು ವಯಸ್ಕರ ಮತದಾನದ ರೀತಿಯಲ್ಲಿ ಜರಗಿತು. ಚುನಾವಣೆಯ ಎಲ್ಲಾ ಹಂತಗಳನ್ನು ಪಾಲಿಸಿ ವಿದ್ಯಾರ್ಥಿಗಳಿಗೆ ಮತದಾನದ ಜಾಗ್ರತಿ ಮೂಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಮುಖ್ಯ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಚುನಾವಣೆಯ ಎಲ್ಲಾ ಹಂತಗಳನ್ನು ಮಕ್ಕಳೇ ನಿರ್ವಹಿಸುದರ ಮೂಲಕ ಚುನಾವಣೆಯ ಅರಿವು ಎಳೆ ಮನಸಿನಲ್ಲಿ ಅಚೋತ್ತುವಂತಯಿತು. ಬಳಿಕ ಮುಖ್ಯಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಮುಖ್ಯಚುನಾವಣಾಧಿಕಾರಿಯು ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಂತೆ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲೂ ಸಂತೋಷ ತುಂಬಿತು. ಶಾಲಾ ನಾಯಕಿಯಾಗಿ ಕುಮಾರಿ ಧನ್ಯ ಹಾಗೂ ಶಾಲಾಉಪ ನಾಯಕನಾಗಿ ಮೊಹಮದ್ ಮಿಕ್ಡದ್ ಆಯ್ಕೆಯಾದರು. ವಿದ್ಯಾಭ್ಯಾಸ ಮಂತ್ರಿಯಾಗಿ ಮುಬಾಸಿರ್, ಆಹಾರ ಮಂತ್ರಿಯಾಗಿ ಹೃತ್ವಿಕ್, ಕ್ರೀಡಾ ಮಂತ್ರಿಯಾಗಿ ಸಾಹಿಮ್ ಆಯ್ಕೆಯಾದರು. ಮುಖ್ಯಚುನಾವಣಾಧಿಕಾರಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣವಚನ ಭೋದಿಸಿದರು. ಬಳಿಕ ವಿಜೇತ ಅಭ್ಯರ್ಥಿ ಗಳು ಸಿಹಿತಿಂಡಿ ಮಕ್ಕಳಿಗೆ ವಿತರಿಸುವ ಮೂಲಕ ಸಂತೋಷ ಹಂಚಿಕೊಂಡರು. ಶಾಲಾ ಚುನಾವಣೆಯಲ್ಲಿ ಅಧ್ಯಾಪಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 2019-20ನೇ ಸಾಲಿನ ಶಾಲಾ ಚುನಾವಣೆಯು ವಯಸ್ಕರ ಮತದಾನದ ರೀತಿಯಲ್ಲಿ ಜರಗಿತು. ಚುನಾವಣೆಯ ಎಲ್ಲಾ ಹಂತಗಳನ್ನು ಪಾಲಿಸಿ ವಿದ್ಯಾರ್ಥಿಗಳಿಗೆ ಮತದಾನದ ಜಾಗ್ರತಿ ಮೂಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಮುಖ್ಯ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಚುನಾವಣೆಯ ಎಲ್ಲಾ ಹಂತಗಳನ್ನು ಮಕ್ಕಳೇ ನಿರ್ವಹಿಸುದರ ಮೂಲಕ ಚುನಾವಣೆಯ ಅರಿವು ಎಳೆ ಮನಸಿನಲ್ಲಿ ಅಚೋತ್ತುವಂತಯಿತು. ಬಳಿಕ ಮುಖ್ಯಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಮುಖ್ಯಚುನಾವಣಾಧಿಕಾರಿಯು ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಂತೆ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲೂ ಸಂತೋಷ ತುಂಬಿತು. ಶಾಲಾ ನಾಯಕಿಯಾಗಿ ಕುಮಾರಿ ಧನ್ಯ ಹಾಗೂ ಶಾಲಾಉಪ ನಾಯಕನಾಗಿ ಮೊಹಮದ್ ಮಿಕ್ಡದ್ ಆಯ್ಕೆಯಾದರು. ವಿದ್ಯಾಭ್ಯಾಸ ಮಂತ್ರಿಯಾಗಿ ಮುಬಾಸಿರ್, ಆಹಾರ ಮಂತ್ರಿಯಾಗಿ ಹೃತ್ವಿಕ್, ಕ್ರೀಡಾ ಮಂತ್ರಿಯಾಗಿ ಸಾಹಿಮ್ ಆಯ್ಕೆಯಾದರು. ಮುಖ್ಯಚುನಾವಣಾಧಿಕಾರಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣವಚನ ಭೋದಿಸಿದರು. ಬಳಿಕ ವಿಜೇತ ಅಭ್ಯರ್ಥಿ ಗಳು ಸಿಹಿತಿಂಡಿ ಮಕ್ಕಳಿಗೆ ವಿತರಿಸುವ ಮೂಲಕ ಸಂತೋಷ ಹಂಚಿಕೊಂಡರು. ಶಾಲಾ ಚುನಾವಣೆಯಲ್ಲಿ ಅಧ್ಯಾಪಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.
Thursday, 4 July 2019
Subscribe to:
Posts (Atom)




















