ಶಾಲಾ ರಕ್ಷಕ ಶಿಕ್ಷಕ ಮಹಾಸಭೆ
ತಾರೀಕು 30/06/2017 ರ ಶುಕ್ರವಾರದಂದು ಅಪರಾಹ್ನ ೩ ಗಂಟೆಗೆ ಸರಿಯಾಗಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ೨೦೧೭-೧೮ ಶಾಲಿನ ಶೈಕ್ಷಣಿಕ ವರ್ಷದ ನೂತನ ಪಿ ಟಿ ಎ ಅಧ್ಯಕ್ಷರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಿ ನೂತನ ಅಧ್ಯಕ್ಷರಾಗಿ ಶ್ರೀ ಶಿವರಾಜ್ ಬೋಳಪದವು ಹಾಗು ಉಪ ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಮೊಹಮ್ಮದ್ ಕೆದುಂಬಾಡಿ ರವರು ಆಯ್ಕೆ ಗೊಂಡರು. ಹಾಗು ಮಾತೃ ಪಿ ಟಿ ಎ ಅಧ್ಯಕ್ಷರಾಗಿ ಶ್ರೀಮತಿ ಮಮತಾ ರವರು ಉಪ ಮಾತೃ ಪಿ ಟಿ ಎ ಯಾಗಿ ಶ್ರೀಮತಿ ಮಂಜುಳಾ ರವರು ಆಯ್ಕೆ ಗೊಂಡರು. ಕಾರ್ಯಕ್ರಮಕ್ಕೆ ಶುಭ ಹಾರೈಸಲು ಶಾಲಾ ಪ್ರಬಂಧಕರು ಹಾಗು ಮಾಜಿ ಪಿ ಟಿ ಎ ಅಧ್ಯಕ್ಷರು ಉಪಸ್ಥಿತರಿದ್ದರು. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳಿಗಿರುವ ಉಚಿತ ಸಮವಸ್ತ್ರವನ್ನು ರಕ್ಷಕರ ಸಾನಿಧ್ಯದಲ್ಲಿ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿ ಶಾಲಾ ಶಿಕ್ಷಕಿ ಶಶಿಕಲಾರವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು. Monday, 3 July 2017
Saturday, 24 June 2017
ELECTION 2017
ಮುಡೂರ್ ತೋಕೆಯಲ್ಲಿ ಚುನಾವಣೆ 2017
ವರ್ಕಾಡಿ ಜೂನ್ 24 : ತಾರೀಕು 23/06/2017 ರಂದು ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ 2017-18 ನೇ ಸಾಲಿನ ಮಕ್ಕಳ ಪಾರ್ಲಿಮೆಂಟ್ ಚುನಾವಣೆಯು ವಯಸ್ಕರ ಮತದಾನದ ಮಾದರಿಯಲ್ಲಿ ನಡೆಸಲಾಯಿತು. ಶಾಲಾ ನಾಯಕನಾಗಿ ಅಬ್ದುಲ್ ರಹಿಮಾನ್ ಸಾಫ್ವಾನ್ ಹಾಗು ಉಪನಾಯಕನಾಗಿ ಇಬ್ರಾಹಿಂ ಉದೈಫ್ ಆಯ್ಕೆ ಗೊಂಡರು. ಬಳಿಕ ಮಂತ್ರಿ ಮಂಡಲ ರಚಿಸಿ ಇನ್ನಿತರ ಮಂತ್ರಿಗಳನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾದ್ಯಾಯರು ಹಾಗು ಶಿಕ್ಷಕರು ಉಪಸ್ಥಿತರಿದ್ದರು.
![]() |
| ನಾಮಪತ್ರ ಸಲ್ಲಿಕೆ |
Friday, 9 June 2017
Tuesday, 6 June 2017
Monday, 5 June 2017
PRAVESHOTSAVA 2017-18
ಶಾಲಾ ಪ್ರವೇಶೋತ್ಸವ
ಶಾಲಾ ಪ್ರವೇಶೋತ್ಸವ : ವರ್ಕಾಡಿ ಜೂನ್ 1: ಶ್ರೀ ಸುಭ್ರಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆಯಲ್ಲಿ 2017-18 ನೇ ಸಾಲಿನ ಶಾಲಾ ಪ್ರವೇಶೋತ್ಸವವು ಜರಗಿತು. ಪ್ರವೇಶೋತ್ಸವದ ಉಧ್ಫಾಟನೆಯನ್ನು ವಾರ್ಡ ಸದಸ್ಯೆ ಶ್ರೀಮತಿ ಜಸಿಂತ ಡಿಸೋಜರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಭಂದಕರು,ರಕ್ಷಕ-ಶಿಕ್ಷಕ ಸಂಘದ ಅದ್ಯಕ್ಷರು ಹಾಗು ಇತರರು ಉಪಸ್ತಿತರಿದ್ದರು.
ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಾಠ ಪುಸ್ತಕ ವಿತರಿಸಲಾಯಿತು.
Saturday, 11 March 2017
ಜಾರುಬಂಡಿ ಮತ್ತು ಶಾಲಾ ಮಟ್ಟದ ಹಲೋ ಇಂಗ್ಲೀಷ್ ಉಧ್ಘಾಟನೆ
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆ ಯಲ್ಲಿ ತಾರೀಕು 10 ಮಾರ್ಚ್ 2017 ರಂದು ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಜಾರುಬಂಡಿಯ ಹಾಗು ಹಲೋ ಇಂಗ್ಲೀಷ್ ನ ಉದ್ಘಾಟನಾ ಕಾರ್ಯಕ್ರಮ ಜರಗಿತು. ಜಾರುಬಂಡಿಯ ಉದ್ಙಾಟನೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಅಬ್ದುಲ್ ರಹೀಮಾನ್ ಹಾಗು ಹಲೋ ಇಂಗ್ಲೀಷ್ ನ ಉದ್ಘಾಟನೆಯನ್ನು ಮಂಜೇಶ್ವರ ಬ್ಲೋಕ್ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಎ ಕೆ ಯಂ ಅಶ್ರಫ್ ರವರು ನಡೆಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಾರ್ಡ ಸದಸ್ಯೆ ಶ್ರೀಮತಿ ಜೆಸಿಂತ ಡಿಸೋಜರವರುವಹಿಸಿ ಕಾರ್ಯಕ್ರಮಕ್ಕೆ ಶುಭಾಸಂಷನೆ ನೀಡಿದರು. ಶಾಲಾ ಅಭಿವೃಧಿ ಸಮೀತಿಯ ಕಾರ್ಯದರ್ಶಿ ಶ್ರೀ ತೃಶಾಂತ್, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಮುಸ್ತಫ್ ತೋಕೆ, ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಜೇಶ್ವರ ಉಪಜಿಲ್ಲೆಯ BPO ಶ್ರೀ ವಿಜಯ ಕುಮಾರ್ ರವರು ಕಾರ್ಯಕ್ರಮದ ಅತಿಥಿಗಳಾದ ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು ಹಾಗು ಹಲೋ ಇಂಗ್ಲೀಷ್ ನ ಭಾಗವಾಗಿ ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾರವರು ಮಕ್ಕಳಿಗೊಂದು ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ ಶ್ರೀ ಶೈಲೇಶ್ ರವರು ಧನ್ಯವಾದ ಹೇಳಿದರು.
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆ ಯಲ್ಲಿ ತಾರೀಕು 10 ಮಾರ್ಚ್ 2017 ರಂದು ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಜಾರುಬಂಡಿಯ ಹಾಗು ಹಲೋ ಇಂಗ್ಲೀಷ್ ನ ಉದ್ಘಾಟನಾ ಕಾರ್ಯಕ್ರಮ ಜರಗಿತು. ಜಾರುಬಂಡಿಯ ಉದ್ಙಾಟನೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಅಬ್ದುಲ್ ರಹೀಮಾನ್ ಹಾಗು ಹಲೋ ಇಂಗ್ಲೀಷ್ ನ ಉದ್ಘಾಟನೆಯನ್ನು ಮಂಜೇಶ್ವರ ಬ್ಲೋಕ್ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಎ ಕೆ ಯಂ ಅಶ್ರಫ್ ರವರು ನಡೆಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಾರ್ಡ ಸದಸ್ಯೆ ಶ್ರೀಮತಿ ಜೆಸಿಂತ ಡಿಸೋಜರವರುವಹಿಸಿ ಕಾರ್ಯಕ್ರಮಕ್ಕೆ ಶುಭಾಸಂಷನೆ ನೀಡಿದರು. ಶಾಲಾ ಅಭಿವೃಧಿ ಸಮೀತಿಯ ಕಾರ್ಯದರ್ಶಿ ಶ್ರೀ ತೃಶಾಂತ್, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಮುಸ್ತಫ್ ತೋಕೆ, ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಜೇಶ್ವರ ಉಪಜಿಲ್ಲೆಯ BPO ಶ್ರೀ ವಿಜಯ ಕುಮಾರ್ ರವರು ಕಾರ್ಯಕ್ರಮದ ಅತಿಥಿಗಳಾದ ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು ಹಾಗು ಹಲೋ ಇಂಗ್ಲೀಷ್ ನ ಭಾಗವಾಗಿ ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾರವರು ಮಕ್ಕಳಿಗೊಂದು ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ ಶ್ರೀ ಶೈಲೇಶ್ ರವರು ಧನ್ಯವಾದ ಹೇಳಿದರು.
Thursday, 9 March 2017
Monday, 27 February 2017
ಹಳೆ ವಿದ್ಯಾರ್ಥಿಗಳ ಸಂಗಮ
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಯಲ್ ಪಿ ಶಾಲೆ ಮುಡೂರುತೋಕೆಯಲ್ಲಿ ತಾರೀಕು 26 ಫೆಬ್ರವರಿ 2017ರಂದು ಅಪರಾಹ್ನ 2 ಗಂಟೆಗೆ ಸರಿಯಾಗಿ ಹಳೆ ವಿದ್ಯಾರ್ಥಿಗಳ ಸಂಗಮದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೆನೇಜರರಾದ ಶ್ರೀಯುತ ದೇವಪ್ಪ ಶೆಟ್ಟಿವಹಿಸಿದರು. ಶಾಲಾ ಪಿ ಟಿ ಎ ಅದ್ಯಕ್ಷ ಶ್ರೀ ಅಬ್ದುಲ್ ರಹಿಮಾನ್ ಮಾಜಿ ಪಿ ಟಿ ಎ ಅದ್ಯಕ್ಷ ಶ್ರೀ ಸೋಮನಾಥ ಕಾರಂತ ಉಪಸ್ಥಿತರಿದ್ದರು. ಶಾಲೆಯ ಹಳೆವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿದರು. ಬಳಿಕ ಹಳೆ ವಿದ್ಯಾರ್ಥಿಗಳ ಸಂಘ ಹಾಗು ಶಾಲಾಭಿವೃದ್ದಿ ಸಮಿತಿಯ ರೂಪೀಕರಣ ನಡೆಯಿತು. ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಮಹಮ್ಮದ್ ಮುಸ್ತಾಫ ತೋಕೆ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ತೌಡುಗೋಳಿ. ಆನಂದ ನೀರೊಳಿಕೆ, ನವೀನ ಮುಡಿಮಾರು ಕಾರ್ಯದರ್ಶಿಯಾಗಿ ಮತ್ತು ಸದಸ್ಯರುಗಳನ್ನು ಆರಿಸಲಾಯಿತು. ಶಾಲಾಭಿವೃದ್ದಿಯ ಸಮಿತಿಯನ್ನು ರೂಪೀಸಲಾಯಿತು.
Subscribe to:
Posts (Atom)




















































