Tuesday 15 August 2017

71st Indian independence Celebration

71  ನೇ ಸ್ವಾತಂತ್ರೋತ್ಸವ ಆಚರಣೆ  
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಶಾಲೆಯಲ್ಲಿ 71 ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆಯನ್ನು ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು. ಬೆಳಗ್ಗೆ 9.30 ಕ್ಕೆ ಶಾಲಾ ರಕ್ಷಕ-ಶಿಕ್ಷಕ  ಸಂಘದ ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ಟ್ ರವರು ಧ್ವಜಾರೋಹಣ ನಡೆಸಿದರು. ಬಳಿಕ ಸಭಾ ಕಾರ್ಯಕ್ರಮವು ಜರಗಿತು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿ ಯವರು ವಹಿಸಿದರು ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ಮುಸ್ತಾಫ್ತ್ , ಮಾಜಿ ಪಿ ಟಿ ಎ ಅಧ್ಯಕ್ಷರುಗಳಾದ ಸೋಮನಾಥ್ ಕಾರಂತ್ ,ಅಬ್ದುಲ್ ರಹಿಮಾನ್ ಮುಂತಾದವರು ಭಾಗವಹಿಸಿದ ಕಾರ್ಯಕ್ರಮಕ್ಕೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಕೆ ಯವರು ಸ್ವಾಗತಿಸಿ ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ರವರು ಧನ್ಯವಾದವಿತ್ತರು . ಶಾಲಾ ಶಿಕ್ಷಕ ಶೈಲೇಶ್ ಹಾಗು ಶಿಕ್ಷಕಿಯಾದ ಫೌಸಿಯ  ಕಾರ್ಯಕ್ರಮದ  ನಿರೂಪಣೆಯನ್ನು ನಡೆಸಿಕೊಟ್ಟರು. ಇದರೊಂದಿಗೆ ಶಾಲಾ ವಿದ್ಯಾರ್ಥಿಗಳಿಕೆ ಶಾಲಾಮಟ್ಟದಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಣೆಯು ಜರಗಿತು. ಬಳಿಕ ಶಾಲಾ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಾ ರವರು ನಡೆಸಿಕೊಟ್ಟರು . 

ಕಾರ್ಯಕ್ರಮದ ಕೆಲವು ಚಿತ್ರ ಗಳು 

 
  

Tuesday 1 August 2017

ತರಕಾರಿ ಬೀಜ ವಿತರಣೆ  
ವರ್ಕಾಡಿ ಕೃಷಿ ಇಲಾಖೆಯಿಂದ ದೊರೆತ ಉಚಿತ ತರಕಾರಿ ಬೀಜವನ್ನು ವಿತರಿಸುವುದು