Friday 11 January 2019

Udayavani report


*ಮುಡೂರು ತೋಕೆ ಶಾಲಾ ವಾರ್ಷಿಕೋತ್ಸವ*
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆ ಯಲ್ಲಿ 65ನೇ ವರ್ಷದ ಶಾಲಾ ವಾರ್ಷಿಕೋತ್ಸವ ವು ಬಹಳ ವಿಜೃಂಭಣೆಯಿಂದ  ಜರಗಿತು. ಪಿ.ಟಿ. ಎ ಅಧ್ಯಕ್ಷ ಶ್ರೀ ಅಬೂಬಕರ್ ಸಿದ್ಧಿಕ್ ಶಾಲಾ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ದ ಉದ್ಘಾಟನೆಯನ್ನು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ ರವರು ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಅಲಂಕರಿಸಿ ದರು. ಕಾರ್ಯಕ್ರಮ ದ ಅತಿಥಿ ಗಳಗಿ ಸುಣ್ಣನಂಗಳ ವರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜ ಹಾಗೂ ಮಂಜೇಶ್ವರ ಉಪಜಿಲ್ಲಾ ಬಿ ಪಿ ಓ ಆದಂತಹ ಶ್ರೀ ವಿಜಯ ಕುಮಾರ್. ಪಿ ಯವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಿವೃತಲಾಗಲಿರುವ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ವಯವರಿಗೆ ಬೀಳ್ಕೊಡುಗೆ ಸಮಾರಂಭವು ಜರಗಿತು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಶ್ರೀಮತಿ ಚಂದ್ರಾವತಿ ಯವರು ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ರವರು ವಂದಿಸಿದರು.
ವಿದ್ಯಾರ್ಥಿಗಳಿಂದ ಸಂಸ್ಕೃತಿ ಕ ಕಾರ್ಯಕ್ರಮ ವು ಜರಗಿತು