ಮುಡೂರ್ ತೋಕೆ ಶಾಲೆಯಲ್ಲಿ ಕಲಿಕೋತ್ಸವದ ಸಂಭ್ರಮ
ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಎಲ್.ಪಿ. ಶಾಲೆ ಮುಡೂರ್ ತೋಕೆಯಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ಮಕ್ಕಳ ಕಲಿಕಾ ಪ್ರದರ್ಶನವಾದ ಕಲಿಕೋತ್ಸವ 2020 ಊರಿನ ಹಿರಿಮೆಯ ಉತ್ಸವವಾಗಿ ಊರ ಜನರ ಸಹಭಾಗಿತ್ವದಿಂದ ಬಹಳ ಸಂಭ್ರಮದಿಂದ ಆಚರಿಸಲಾಯಿತು .
ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶಶಿಕಲಾ ಕಾರ್ಯಕ್ರಮಕ್ಕೆ ಸ್ವಾಗತಕೋರಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾರವರು ನೆರವೇರಿಸಿದರು. ಕಾಸರಗೋಡು ಜಿಲ್ಲಾ ಪ್ರೋಗ್ರಾಮ್ ಆಫೀಸರ್ ಶ್ರೀ ನಾರಾಯಣ ದೇಲಂಪಾಡಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ದಿನೇಶ್ , ಮಂಜೇಶ್ವರ ಉಪಜಿಲ್ಲಾ ಬಿ.ಪಿ.ಓ ಶ್ರೀ ಆದರ್ಶ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಪ್ರತಿನಿಧಿಗಳು ಸೇರಿಂದಂತೆ ಊರ ಹಲವು ಗಣ್ಯವ್ಯಕ್ತಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಪ್ರಬಂಧಕ ಶ್ರೀ ದೇವಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಶ್ರೀಮತಿ ಲಾವಣ್ಯ ನಿರೂಪಿಸಿ ಶಾಲಾ ಶಿಕ್ಷಕಿ ಶ್ರೀಮತಿ ಫೌಸಿಯ ಧನ್ಯವಾದವಿತ್ತರು.
ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಎಲ್.ಪಿ. ಶಾಲೆ ಮುಡೂರ್ ತೋಕೆಯಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ಮಕ್ಕಳ ಕಲಿಕಾ ಪ್ರದರ್ಶನವಾದ ಕಲಿಕೋತ್ಸವ 2020 ಊರಿನ ಹಿರಿಮೆಯ ಉತ್ಸವವಾಗಿ ಊರ ಜನರ ಸಹಭಾಗಿತ್ವದಿಂದ ಬಹಳ ಸಂಭ್ರಮದಿಂದ ಆಚರಿಸಲಾಯಿತು .
ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶಶಿಕಲಾ ಕಾರ್ಯಕ್ರಮಕ್ಕೆ ಸ್ವಾಗತಕೋರಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾರವರು ನೆರವೇರಿಸಿದರು. ಕಾಸರಗೋಡು ಜಿಲ್ಲಾ ಪ್ರೋಗ್ರಾಮ್ ಆಫೀಸರ್ ಶ್ರೀ ನಾರಾಯಣ ದೇಲಂಪಾಡಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ದಿನೇಶ್ , ಮಂಜೇಶ್ವರ ಉಪಜಿಲ್ಲಾ ಬಿ.ಪಿ.ಓ ಶ್ರೀ ಆದರ್ಶ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಪ್ರತಿನಿಧಿಗಳು ಸೇರಿಂದಂತೆ ಊರ ಹಲವು ಗಣ್ಯವ್ಯಕ್ತಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಪ್ರಬಂಧಕ ಶ್ರೀ ದೇವಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಶ್ರೀಮತಿ ಲಾವಣ್ಯ ನಿರೂಪಿಸಿ ಶಾಲಾ ಶಿಕ್ಷಕಿ ಶ್ರೀಮತಿ ಫೌಸಿಯ ಧನ್ಯವಾದವಿತ್ತರು.