Friday 6 September 2019

ಮುಡೂರ್ ತೋಕೆ ಶಾಲೆಯಲ್ಲಿ ಲ್ಯಾಪ್ಟಾಪ್ ಪ್ರಾಜೆಕ್ಟರ್ ಉದ್ಘಾಟನೆ ಹಾಗೂ ಓಣಂ ಆಚರಣೆ


ವರ್ಕಾಡಿ: ಶ್ರೀ ಸುಬ್ರಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆಯಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ದ ಭಾಗವಾಗಿ ಲಭಿಸಿದ ಲ್ಯಾಪ್ಟಾಪ್ ಹಾಗೂ ಪ್ರಾಜೆಕ್ಟರ್ ಗಳ ಉದ್ಘಾಟನೆ ಮತ್ತು ಓಣಂ ಹಬ್ಬದ ಆಚರಣೆಯು ಬಹಳ ವಿಜ್ರಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಉಪ ಜಿಲ್ಲಾ ಬಿಪಿಓ ಕುಮಾರ್ ನೆರವೇರಿಸಿದರು. ಲ್ಯಾಪ್ಟಾಪ್ ಪ್ರೊಜೆಕ್ಟ್ರ್ ಗಳ ಉದ್ಘಾಟನೆಯನ್ನು ನಿವೃತ ಮುಕ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರವತಿ ನೆರವೇರಿಸಿದರು. ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ಅಬೂಬಕ್ಕರ್ ಸಿಧ್ಧಿಕ್ ಹಾಗೂ ಮಾತೃ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ಮಮತಾ ರವರು ಶುಭ ಹಾರೈಸಿದರು. ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ ಹಾಗೂ ಇತರ ಆಟೋಟ ಸ್ಪರ್ಧೆ ಮಕ್ಕಳಿಗೂ ಮಕ್ಕಳ ಹೆತ್ತವರಿಗೂ ನಡೆಸಲಾಯಿತು. ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶಶಿಕಲಾ ಸ್ವಾಗತಿಸಿದ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕಿ ಶ್ರೀಮತಿ ಲಾವಣ್ಯ ನಿರೂಪಿಸಿದರು. ಶಾಲಾ ಶಿಕ್ಷಕ ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.