Wednesday 29 June 2016

ಪಿ.ಟಿ. ಎ ಮಹಾಸಭೆಯ ವರದಿ

ಎಸ್.ಎಸ್.ಎ. ಎಲ್.ಪಿ ಮೂಡೂರ್ ತೋಕೆಯಲ್ಲಿ 2016-17 ನೇ ಶೈಕ್ಷಣಿಕ ವರ್ಷದ ಮೊದಲ ಪಿ.ಟಿ.ಎ ಸಭೆಯು ದಿನಾಂಕ 29.6.2016 ರಂದು ಮಧ್ಯಾಹ್ನ 2.30 ಕ್ಕೆ ಸರಿಯಾಗಿ  ಜರಗಿತು.ಈ ಸಂದರ್ಭದಲ್ಲಿ ನಮ್ಮ ಶಾಲಾ ಮೇನೇಜರರಾದ  ಶ್ರೀಮಾನ್ ದೇವಪ್ಪ ಸರ್, ಪ್ರಸ್ತುತ ಪಿ.ಟಿ. ಎ ಅಧ್ಯಕ್ಷರರರಾದ  ಅಬ್ದುಲ್ ರಹಿಮಾನ್ ಉಸ್ತಾದ್ ರವರು ,ಮಾತೃ ಸಂಘದ ಅಧ್ಯಕ್ಷರಾದ ಸೆಫಿನಾ ರವರು,ರಕ್ಷಕರು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಪ್ರಸ್ತುತ ಶಾಲಾ ಹಿರಿಮೆಗಳನ್ನು ,ಸಮಸ್ಯೆಗಳನ್ನು ಈ ಸಂಧರ್ಭದಲ್ಲಿ ಚರ್ಚಿಸಲಾಯಿತು.
ಮೊದಲ ಪಿ.ಟಿ. ಎ ಸಭೆಯ ಅಜೆಂಡಾಗಳು:
  ★ನೂತನ ಕಾರ್ಯಕಾರಿ ಸಮಿತಿಯ ರಚನೆ
  ★ತರಕಾರಿ ತೋಟದ ನಿರ್ಮಾಣ
ಈ ಎರಡು ಅಜೆಂಡಾಗಳನ್ನು ಚರ್ಚಿಸಲಾಯಿತು.
ಅಬ್ದುಲ್ ರಹಿಮಾನ್ ರವರನನ್ನು ಪುನಃ ನೂತನ ಪಿ.ಟಿ. ಎ ಅಧ್ಯಕ್ಷ ರನ್ನಾಗಿಯೂ ಉಸ್ಮಾನ್ ರವರನ್ನು ಉಪಾಧ್ಯಕ್ಷರನ್ನಾಗಿಯೂ ಆರಿಸಲಾಯಿತು.ಮಾತೃ ಸಂಘದ ಅಧ್ಯಕ್ಷರಾಗಿ ರೇಖರವರನ್ನು ಹಾಗೂ ಉಪಾಧ್ಯಕ್ಷರಾಗಿ ಸೆಫಿನಾರವರನ್ನು ಆರಿಸಲಾಯಿತು. ಬಳಿಕ 2ನೆಯ ಅಜೆಂಡಾ ವನ್ನು ಚರ್ಚಿಸಲಾಯಿತು .ಪಿ.ಟಿ. ಎ ಸಮ್ಮತಿಯ ಮೇರೆಗೆ ತರಕಾರಿ ತೋಟದ ಬದಲು ಪೆಡಗೋಜಿ ಪಾರ್ಕ್ ಮಾಡಲು ತೀರ್ಮಾನಿಸಲಾಯಿತು.ಅದಿಕ್ಕೆ ಬೇಕಾದ ಹಣ ಸಹಾಯವನ್ನು ರಕ್ಷಕರು,ಮೆನೇಜರ್,ಅಧ್ಯಾಪಕರು ಹಾಗು ಊರವರ ಸಹಾಯದಿಂದ ಮಾಡುವುದೆಂದು ತೀರ್ಮಾನಿಸಲಾಯಿತು.

No comments:

Post a Comment