Monday 30 January 2017

ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ 

ತಾರೀಕು 27/01/2017 ನೇ ಶುಕ್ರವಾರ 11 ಗಂಟೆಗೆ ಸರಿಯಾಗಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ದ ಶಾಲಾಮಟ್ಟದ ಕಾರ್ಯಕ್ರಮ ನಮ್ಮ ಶಾಲೆಯಲಿ ಜರಗಿತು. ಸಾರ್ವಜನಿಕ ಶಿಕ್ಷಣ ವಲಯವನ್ನು ಬಲಗೊಳಿಸುವ ಸರಕಾರದ ಉದ್ದೇಶಕನುಸಾರವಾಗಿ ಹಳೆವಿದ್ಯಾರ್ಥಿಗಳ,ರಕ್ಷಕರು,ಊರವರ ಮಹಾಸಂಗಮ ನಡೆಯಿತು. 

ಶಾಲಾ ವ್ಯವಸ್ಥಾಪಕರಾದ ಶ್ರೀಯುತ ದೇವಪ್ಪ ಶೆಟ್ಟಿ ,  ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಯಾದ ಶ್ರೀಯುತ ಅಬ್ದುಲ್ ರಹಿಮಾನ್ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಕ್ಯೋಪಾದ್ಯಾಯಿನಿ ಶ್ರೀಮತಿ ಚಂದ್ರಾವತಿ ಕಾರ್ಯಕ್ರಮದ ವಿವರವನ್ನು ತಿಳಿಸಿದರು. ಬಳಿಕ ಎಲ್ಲರ ಸಮ್ಮುಖದಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣೆಗೆ ಸಂಭಂದಿಸಿ ಸ್ವೀಕರಿಸಬೇಕಾದ ಪ್ರತಿಜ್ಞೆಯನ್ನು ನೆರವೇರಿಸಲಾಯಿತು . ಶಾಲಾ  ಹಾಗು ಹಳೆ ವಿದ್ಯಾರ್ಥಿಯಾದ ಆನಂದರವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಬಳಿಕ ಎಲ್ಲರು ಸೇರಿ ಶಾಲಾ ವಠಾರ ವನ್ನು ಶುಚಿಗೊಳಿಸಲಾಯಿತು. 





No comments:

Post a Comment