Monday 27 February 2017

ಹಳೆ ವಿದ್ಯಾರ್ಥಿಗಳ ಸಂಗಮ












ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಯಲ್ ಪಿ ಶಾಲೆ ಮುಡೂರುತೋಕೆಯಲ್ಲಿ ತಾರೀಕು 26 ಫೆಬ್ರವರಿ 2017ರಂದು ಅಪರಾಹ್ನ 2 ಗಂಟೆಗೆ ಸರಿಯಾಗಿ ಹಳೆ ವಿದ್ಯಾರ್ಥಿಗಳ ಸಂಗಮದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೆನೇಜರರಾದ ಶ್ರೀಯುತ ದೇವಪ್ಪ ಶೆಟ್ಟಿವಹಿಸಿದರು. ಶಾಲಾ ಪಿ ಟಿ ಎ ಅದ್ಯಕ್ಷ ಶ್ರೀ ಅಬ್ದುಲ್ ರಹಿಮಾನ್ ಮಾಜಿ ಪಿ ಟಿ ಎ ಅದ್ಯಕ್ಷ ಶ್ರೀ ಸೋಮನಾಥ ಕಾರಂತ ಉಪಸ್ಥಿತರಿದ್ದರು. ಶಾಲೆಯ ಹಳೆವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿದರು. ಬಳಿಕ ಹಳೆ ವಿದ್ಯಾರ್ಥಿಗಳ ಸಂಘ ಹಾಗು ಶಾಲಾಭಿವೃದ್ದಿ ಸಮಿತಿಯ ರೂಪೀಕರಣ ನಡೆಯಿತು. ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಮಹಮ್ಮದ್ ಮುಸ್ತಾಫ ತೋಕೆ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ತೌಡುಗೋಳಿ.  ಆನಂದ ನೀರೊಳಿಕೆ, ನವೀನ ಮುಡಿಮಾರು ಕಾರ್ಯದರ್ಶಿಯಾಗಿ ಮತ್ತು ಸದಸ್ಯರುಗಳನ್ನು ಆರಿಸಲಾಯಿತು. ಶಾಲಾಭಿವೃದ್ದಿಯ ಸಮಿತಿಯನ್ನು ರೂಪೀಸಲಾಯಿತು.

No comments:

Post a Comment