Wednesday 7 March 2018

Prathibhotsava Report

ಶಾಲೆಗಳ ಬೆಳವಣಿಗೆಗೆ ಊರವರ ಸಹಕಾರ ಅತ್ಯಗತ್ಯ: ಅಬ್ದುಲ್ ಮಜೀದ್

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಯಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದ ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಬ್ದುಲ್ ಮಜೀದ್ ಬಿ ಎ ಯವರು ಶಾಲೆಗಳ ಸರ್ವೋತುಮುಖ ಅಭಿವರ್ಧಿಗೆ ಊರವರ ಸಹಕಾರ ಅತ್ಯಗತ್ಯ ಎಂದು ನುಡಿದರು. ಶಾಲಾ ಪ್ರಬಂಧಕ ಶ್ರೀ ದೇವಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲೆಯ ವಿದ್ಯಾಧಿಕಾರಿಗಳದ ಶ್ರೀ ದಿನೇಶ್ , ಮಂಜೇಶ್ವರ ಉಪಜಿಲ್ಲಾ ಬಿ ಪಿ ಓ ಶ್ರೀ ವಿಜಯಕುಮಾರ್ ಹಾಗೂ ಎ ಯು ಪಿ ಶಾಲೆ ಕಳಿಯೂರ್ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪವತಿ ಯವರು ಮುಖ್ಯ ಅತಿಥಿಗಳದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರವತಿ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು.





















No comments:

Post a Comment