ಆತ್ಮಿಯ ರಕ್ಷಕರೇ...
ಅಗೋಸ್ಟ್ ತಿಂಗಳ 15 ನೇ ತಾರೀಕು ಎಲ್ಲರಿಗೂ ತಿಳಿದಿರುವಂತೆ ದೇಶದೆಲ್ಲೆಡೆ ಪ್ರತಿಯೊಬ್ಬ ದೇಶ ಪ್ರೇಮಿಯು ಹೆಮ್ಮೆಯಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಯು ಇನ್ನು ಕೆಲವೇ ದಿನಗಳನ್ನು ಬರಲಿರುವುದು. ಅದರ ಅಂಗವಾಗಿ ಎಲ್ಲಾ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರೊಂದಿಗೆ ಪ್ರಿ ಪ್ರೈಮರಿ ಮಕ್ಕಳ ತರಗತಿ ಕೊಠಡಿಯ ಉದ್ಘಾಟನೆಯನ್ನು ಕೂಡ ನಿಶ್ಚಯಿಸಿದ್ದೇವೆ. ಸುನ್ನಂಗಳ ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣ ಹಾಗೂ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಲಿದ್ದಾರೆ. ಕೇದುಂಬಾಡಿ ವಾರ್ಡ್ ಸದಸ್ಯರಾದ ಶ್ರೀ ಶಿವರಾಜ್, ಶಾಲಾ ಪಿ. ಟಿ.ಎ ಅಧ್ಯಕ್ಷರಾದ ಶ್ರೀ ನವೀನ್, ಯಂ.ಪಿ.ಟಿ.ಎ ಅಧ್ಯಕ್ಷೆ ಸರಿತಾ ಮುಂತಾದವರು ಶುಭ ಹಾರೈಸಲಿರುವರು. ಈ ಕಾರ್ಯಕ್ರಮ ಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕವಾಗಿ ಸ್ವಾಗತ Baಯಸುತ್ತಿದ್ದೇವೆ.
No comments:
Post a Comment